ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ ‘ಬುಲ್ಬುಲ್ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ನಾಯಕ ದರ್ಶನ್ ಹಾಗೂ ಸಾಹಸ ಕಲಾವಿದರ ನಡುವೆ ನಡೆಯುವ ಚೇಸಿಂಗ್ ಸನ್ನಿವೇಶದ ಚಿತ್ರೀಕರಣ ನೈಸ್ರೋಡ್ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಅವರ ಸಾರಥ್ಯದಲ್ಲಿ ನಡೆಯಿತು.
ತೂಗುದೀಪ ಪ್ರೊಡಕ್ಷನ್ಸ್ನ ನಿರ್ಮಾಪಕರಾದ ಶ್ರೀಮತಿ ಮೀನಾತೂಗುದೀಪಶ್ರೀನಿವಾಸ್ ಈ ಹಿಂದೆ ತಮ್ಮ ಕಿರಿಯ ಮಗ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ‘ಜೊತೆಜೊತೆಯಲಿ ಹಾಗೂ ‘ನವಗ್ರಹ ಚಿತ್ರಗಳನ್ನು ನಿರ್ಮಿಸಿದ್ದರು. ಈಗ ತಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ದೇಶನದ ಹೊಣೆಯನ್ನು ಎಂ.ಡಿ.ಶ್ರೀಧರ್ ಅವರಿಗೆ ವಹಿಸಿದ್ದಾರೆ. ಇದು ತೆಲುಗಿನ ‘ಡಾರ್ಲಿಂಗ್‘ ಚಿತ್ರದ ರಿಮೇಕ್.
ಇತೀಚೆಗೆ ಬಾಕ್ಸ್ಆಫ಼ೀಸ್ ಕೊಳ್ಳೆಹೊಡೆದ ‘ಸಾರಥಿ ಚಿತ್ರದ ನಿರ್ದೇಶಕರಾದ ದಿನಕರ್ ತೂಗುದೀಪ್ ಈ ಚಿತ್ರದ ನಿರ್ಮಾಣ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವುದರೊಂದಿಗೆ ತಾಯಿ ಮತ್ತು ಅಣ್ಣನಿಗೆ ಸಾಥ್ ನೀಡಿದ್ದಾರೆ.
ತೂಗುದೀಪ ಪ್ರೊಡಕ್ಷನ್ಸ್ನ ಮೊದಲ ಚಿತ್ರ ‘ಜೊತೆಜೊತೆಯಲಿ ಮೂಲಕ ಪ್ರಥಮ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ವಿ.ಹರಿಕೃಷ್ಣ ‘ಬುಲ್ಬುಲ್ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ನಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ಕೃಷ್ಣ ಮುಂತಾದವರಿದ್ದಾರೆ.